Tuesday, April 24, 2012

ಪರಿಕ್ಷೇ..... ನಿರಿಕ್ಷೇ....

 ಎದೆಯಲಿ ಸುಟ್ಟವನು
ಕೊನೆಗು ಕೊಂದಲು ಅಣಿಯಾದವನು
ಕರಕಲು ಮನಸು
ಬೆಂಕಿಯಂತೆ ಕಾದಿರಲು
ತಣ್ಣಗೆ ಬರುತಿವೆ ಕಣ್ಣೀರು
ಕಣ್ಣ ಬುಗ್ಗೆಯಲಿ ಅವಳಿಲ್ಲ.
ತಿಳುವಳಿಕೆ ನನ್ನದೆನೊ.....?
ಅವಳದೆಷ್ಟೋ.........?
ಹಿಡಿದ ಹಾದಿಯೆ ದೃಷ್ಟಾಂತ..
ಕೊನೆಯ ಉಸಿರಿಗೂ ತಾಗದಂತಾಗಬೆಕೆಂದಿದ್ದೇನೆ,
ಸಹಿಸಲಾಗುತ್ತಿಲ್ಲ
ಬಿಸಿಲ ಧಗೆಯಲಿ
ಮಳೆ ಮೋಡ ಗುಡುಗಿನ ಶಬ್ಧ.
ಹೂವಾಡಗಿತ್ತಿ
ನೀನು ಕೊಟ್ಟ
ಅದೆಷ್ಟು ಹೂವುಗಳನು
ಎಲ್ಲೆಲ್ಲಿ ಪೂಸಿದರು,
ನಾನು ಪೂಸಿಕೊಂಡೆನಾ....
ನನ್ನ ಮನಕೆ....?
ಅಥವಾ
ಮೊಗ್ಗು ಮಲ್ಲಿಗೆಗಳ
ಸುಗಂಧಕೆ ನಲುಗಿದೆನಾ.......?
ಚೌಕಟ್ಟಿನಲ್ಲಿ ಬೆಳೆದವನು
ಅದೆನೊ ನಿನ್ನ ನಿರಾತಂಕದಲಿ
ಸಾಯುವ ಕನಸು
ನಾನೆಂದು ಕಂಡವನಲ್ಲಾ,
ಬೆಳೆದು ನಿಂತು
ಎಲ್ಲವನ್ನು ಸ್ವೀಕರಿಸಿದವನು
ಬಿರುಗಾಳಿ ಬಿಸಿ
ಕರುಳ ಬಳ್ಳಿ
ಕಿತ್ತು ಹೊಗಲಿ
ನಿನ್ನೊಂದಿಗೆ....
ಅಪನಂಬಿಕೆ ಎನ್ನುವ ಮಾತಿಲ್ಲ
ಅಂತರಾಳದಲಿ.....
ನಿಂತೊಮ್ಮೆ ಇಣುಕಿದರೆ
ನೀಲಿ ಆಕಾಶವನ್ನಷ್ಟೆ ನಿರಿಕ್ಷೀಸಿದವನು.


No comments:

Post a Comment